Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Wednesday, April 25, 2018

Demotion Promotion judgement implemented, affidavit ready for todays hearing

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧ

ನವದೆಹಲಿ: ಬಡ್ತಿಯಲ್ಲಿ ಮೀಸಲಾತಿ ವಿಧಾನ ಅನುಸರಿಸುವ ರಾಜ್ಯ ಸರ್ಕಾರದ 2002ರ ಕಾಯ್ದೆಯನ್ನು ರದ್ದುಪಡಿಸಿ 2017ರ ಫೆಬ್ರುವರಿ 9ರಂದು ನೀಡಲಾದ ತೀರ್ಪನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಬಿ.ಕೆ. ಪವಿತ್ರಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ತೀರ್ಪಿ
ನಲ್ಲಿ ತಿಳಿಸಿರುವಂತೆ, ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂಬ ಆದೇಶ ಪಾಲಿಸಲಾಗಿದೆ. ಎಲ್ಲ ಇಲಾಖೆ, ಮಂಡಳಿ, ನಿಗಮ ಮತ್ತು ಶಾಸನಬದ್ಧ ಸಂಸ್ಥೆಗಳಲ್ಲಿನ ಬಹುತೇಕ ಹುದ್ದೆಗಳ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಿರುವ ಹಿರಿಯ ಅಧಿಕಾರಿಗಳು, ಮುಂಬಡ್ತಿ ಮತ್ತು ಹಿಂಬಡ್ತಿಯ ಆದೇಶ ನೀಡಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸಲ್ಲಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಅಧಿಕಾರಿಗಳಿಗೆ ಮೀಸಲಾತಿ ಅನ್ವಯ ನೀಡಲಾದ ಬಡ್ತಿ
ಯನ್ನು ರದ್ದುಪಡಿಸಿರುವ ತೀರ್ಪನ್ನು ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವ ಮೂಲಕ ಮೂರು ತಿಂಗಳಲ್ಲಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಸೂಚಿಸಿತ್ತು.
ಆದರೆ, ಸರ್ಕಾರವು ಆದೇಶ ಜಾರಿಗೊಳಿಸದ್ದರಿಂದ ಮತ್ತೆರಡು ಬಾರಿ ಅವಧಿ ವಿಸ್ತರಿಸಿದ್ದ ನ್ಯಾಯಮೂರ್ತಿ
ಗಳಾದ ಆದರ್ಶಕುಮಾರ್‌ ಗೋಯೆಲ್‌ ಹಾಗೂ ಯು.ಯು. ಲಲಿತ್‌ ಅವರನ್ನು ಒಳಗೊಂಡ ನ್ಯಾಯಪೀಠವು, ಒಂದು ತಿಂಗಳೊಳಗೆ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಿತ್ತಲ್ಲದೆ, ಇದಕ್ಕೆ ತಪ್ಪಿದಲ್ಲಿ ಮುಖ್ಯ ಕಾರ್ಯದರ್ಶಿಯವರು ಸ್ವತಃ ವಿಚಾರಣೆಗೆ ಹಾಜರಾಗಬೇಕು ಎಂದು ಕಳೆದ ಮಾರ್ಚ್‌ 
20ರಂದು ನಡೆದಿದ್ದ ವಿಚಾರಣೆ ವೇಳೆ ಸೂಚಿಸಿತ್ತು.
ತೀರ್ಪನ್ನು ಜಾರಿಗೊಳಿಸಲು ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವ
ಕಾಶ ನೀಡುವಂತೆ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಪೀಠ, ತಿಂಗಳಲ್ಲಿ ತೀರ್ಪು ಜಾರಿಗೊಳಿಸ
ಲೇಬೇಕು ಎಂದು ತಾಕೀತು ಮಾಡಿತ್ತು.
ತೀರ್ಪನ್ನು ಪಾಲಿಸಲಾಗಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ಬುಧವಾರ (ಏಪ್ರಿಲ್‌ 25) ನಡೆಯಲಿದೆ. ಲೋಕೋಪಯೋಗಿ ಮತ್ತಿತರ ಇಲಾಖೆಗಳು ಕೋರ್ಟ್‌ ಸೂಚನೆಯನ್ನು ಪಾಲಿಸಿಲ್ಲ ಎಂದು ವಿಚಾರಣೆಯ ವೇಳೆ ದೂರುವುದಾಗಿ ಅರ್ಜಿದಾರರ ಪರ ವಕೀಲ ಕುಮಾರ್‌ ಪರಿಮಳ್‌ ತಿಳಿಸಿದ್ದಾರೆ.
ಆದೇಶ ಪಾಲಿಸಿರುವ ಕಾರಣ ಬುಧವಾರದ ವಿಚಾರಣೆಯ ಸಂದರ್ಭ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ರತ್ನಪ್ರಭಾ ಅವರು ಮನವಿ ಮಾಡಿದ್ದಾರೆ.

Saturday, April 21, 2018

New pay this month

ಏಪ್ರಿಲ್‌ ವೇತನದಲ್ಲೇ ಪರಿಷ್ಕೃತ ಮೊತ್ತ

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಅನ್ವಯ ಸರ್ಕಾರಿ ನೌಕರರ ಪರಿಷ್ಕೃತ ವೇತನ ಏಪ್ರಿಲ್ ತಿಂಗಳ ಸಂಬಳದಲ್ಲೇ ಕೈಗೆ ಸಿಗಲಿದೆ. ಇದರಿಂದ 5.20 ಲಕ್ಷ ನೌಕರರಿಗೆ ಪ್ರಯೋಜನವಾಗಲಿದೆ.


ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ, ಪದವಿ ಶಿಕ್ಷಣ ವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಲ್ಲಿನ ಸುಮಾರು 73,000 ಬೋಧಕೇತರ ಸಿಬ್ಬಂದಿಗಳಿಗೂ ಪರಿಷ್ಕೃತ ವೇತನ ದೊರಕಲಿದೆ.

ವೇತನ ಪರಿಷ್ಕೃರಣೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ ₹ 10,508 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ನೌಕರರ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆದೇಶ ಅನುಷ್ಠಾನಕ್ಕೆ ಚುನಾವಣೆ ಆಯೋಗದ ಅನುಮೋದನೆ ಪಡೆಯಬೇಕಾಗಿತ್ತು. ಈ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ಪರಿಷ್ಕೃತ ವೇತನ ಅನುಷ್ಠಾನ ಸಂಬಂಧ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

‘ಆಯಾ ಇಲಾಖೆಗಳು ನೌಕರರ ಎಚ್‌ಆರ್‌ಎಂಎಸ್‌ನಲ್ಲಿ (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಪರಿಷ್ಕೃತ ವೇತನ ಶ್ರೇಣಿಯನ್ನು ನಮೂದಿಸಲಿವೆ. ಮೇ ತಿಂಗಳಲ್ಲಿ ವಿತರಿಸುವ ಏಪ್ರಿಲ್‌ ತಿಂಗಳ ವೇತನ, ಪರಿಷ್ಕೃತ ವೇತನವಾಗಿರುತ್ತದೆ’ ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ನೌಕರರ ವೇತನವನ್ನು 2017ರ ಜುಲೈ ಒಂದರಿಂದ ಪೂರ್ವಾನ್ವಯವಾಗುವಂತೆ ಶೇ 30ರಷ್ಟು ಹೆಚ್ಚಿಸುವಂತೆ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಆರನೇ ವೇತನ ಶಿಫಾರಸು ಮಾಡಿತ್ತು. ಕನಿಷ್ಠ ವೇತನ ₹ 17,000 ಮತ್ತು ಗರಿಷ್ಠ ವೇತನ ₹ 1,50,600 ನಿಗದಿಪಡಿಸುವಂತೆಯೂ ಆಯೋಗ ಶಿಫಾರಸು ಮಾಡಿದೆ.

₹ 8,500ರ ಕನಿಷ್ಠ ಪಿಂಚಣಿ ಮತ್ತು ₹ 75,300ರ ಗರಿಷ್ಠ ಪಿಂಚಣಿಗೂ ಶಿಫಾರಸು ಮಾಡಲಾಗಿದೆ. ಇದರಿಂದಾಗಿ ಈವರೆಗೆ ಡಿ ಗ್ರೂಪ್ ನೌಕರರಿಗೆ ಇದ್ದ ಆರಂಭಿಕ ಕನಿಷ್ಠ ಮೂಲವೇತನ ₹ 9,600 ಇನ್ನು ₹ 17,000ಕ್ಕೆ ಏರಿಕೆಯಾಗಲಿದೆ.

ಶೇ 45. 25ರಷ್ಟಿದ್ದ ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನವಾಗಲಿದೆ. ಜತೆಗೆ ಶೇ 30ರ ಫಿಟ್ ಮೆಂಟ್(ತಾರತಮ್ಯ ಸರಿದೂಗಿಸುವ ಮೊತ್ತ) ನೌಕರರಿಗೆ ಸಿಗಲಿದೆ.

ಕೈಪಿಡಿ ಸಿದ್ಧ:ತುಟ್ಟಿಭತ್ಯೆ ಹಾಗೂ ಫಿಟ್ ಮೆಂಟ್ ವಿಲೀನದ ಬಳಿಕ ಯಾವ ಹಂತದ ನೌಕರರ ಮೂಲವೇತನವು ಎಷ್ಟಕ್ಕೆ ಏರಿಕೆಯಾಗಲಿದೆ, ಯಾವ ಭತ್ಯೆ ಎಷ್ಟು ಸಿಗಲಿದೆ ಎಂಬ ಪೂರ್ಣ ವಿವರ ಒಳಗೊಂಡಿರುವ 61 ಪುಟಗಳ ಕೈಪಿಡಿಯನ್ನು ಆರ್ಥಿಕ ಇಲಾಖೆ ಪ್ರಕಟಿಸಿದೆ.

ದ್ವಿತೀಯ ದರ್ಜೆ ಸಹಾಯಕರು, ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಅರಣ್ಯ ರಕ್ಷಕರು, ಗ್ರೂಪ್ ಎ ನೌಕರರು ಈಗ ಪಡೆಯುತ್ತಿರುವ ಮೂಲವೇತನ ಎಷ್ಟು, ಪರಿಷ್ಕರಣೆ ಬಳಿಕ ಎಷ್ಟು ಮೊತ್ತಕ್ಕೆ ನಿಗದಿಯಾಗಲಿದೆ ಎಂಬ ಪೂರ್ಣ ವಿವರ ಕೈಪಿಡಿಯಲ್ಲಿದೆ. ಆಯಾ ಶ್ರೇಣಿಯ ನೌಕರ ಸದ್ಯ ಪಡೆಯುತ್ತಿರುವ ವೇತನ–ಪರಿಷ್ಕೃತ ವೇತನ ಎಷ್ಟು ಎಂಬುದನ್ನುಉದಾಹರಣೆಗಳ ಮೂಲಕ ಕೈಪಿಡಿ ವಿವರಿಸಿದೆ.

Promotion demotion newe


Today's demotion promotion news

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.